ಮಣಿಪುರದಲ್ಲಿ ಸಭಾ ಪಾಲಕರ ಹತ್ಯೆ: ಕುಕಿ ಸಮುದಾಯದ ಆಕ್ರೋಶ, ಮೇಣದಬತ್ತಿ ಜಾಗರಣೆ


ಇಂಪಾಲ್:
ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಕುಕಿ ಚರ್ಚ್ ಸಭಾ ಪಾಲಕರನ್ನು ಶಸ್ತ್ರಸಜ್ಜಿತ ಉಗ್ರರು ಹೊಂಚು ಹಾಕಿ ಹತ್ಯೆ ಮಾಡಿದ ಘಟನೆ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಚುರಾಚಂದ್‌ಪುರದಲ್ಲಿ ನಡೆದ ಪ್ರಾರ್ಥನೆಯಿಂದ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಸಾವನ್ನಪ್ಪಿದವರಲ್ಲಿ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರೆವ್. ಡಾ. ವುಮ್‌ಥಾಂಗ್ ಸಿಟ್‌ಲೌ, ಕಾರ್ಯದರ್ಶಿ ರೆವ್. ಕೈಗೌಲುನ್ ಲೌವುಮ್ ಹಾಗೂ ಪಾಸ್ಟರ್. ಪಾವ್‌ಗೌಲೆನ್ ಸಿಟ್‌ಲೌ ಸೇರಿದ್ದಾರೆ.

ಘಟನೆಯನ್ನು ಖಂಡಿಸಿ ಕುಕಿ ಸಂಘಟನೆಗಳು 48 ಗಂಟೆಗಳ ಶಟ್‌ಡೌನ್ ಹಾಗೂ ಶೋಕಾಚರಣೆ ಘೋಷಿಸಿವೆ. ದೆಹಲಿಯ ಮುನಿರ್ಕಾದಲ್ಲಿ ನೂರಾರು ಜನರು ಮೇಣದಬತ್ತಿ ಜಾಗರಣೆ ನಡೆಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಘಟನೆ ಖಂಡಿಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

×

WhatsApp Channel

ಕ್ಷಣ ಕ್ಷಣದ ಸುದ್ದಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಿ.

JOIN NOW